`ಗೌರಿ ಪುತ್ರ` ತೆರೆಗೆ ಬರಲು ಹತ್ರ
Posted date: 28 Wed, Dec 2011 ? 09:56:04 AM

೧೦೦ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡು ಎನ್ನುತ್ತದೆ ಜಗತ್ತು. ಹಾಗೆಯೇ ಒಂದು ದಿವಸದ, ಒಂದು ವಾರದ, ಒಂದು ನಿಮಿಷದ ಹಾಗೂ ಜನ್ಮಜನ್ಮದ ಮದುವೆಗಳು ಕೇಳಿರುವುದುಂಟು. ಈ ’ಗೌರಿ ಪುತ್ರ’ ಚಿತ್ರದಲ್ಲಿ ಸುಳ್ಳು ಹೇಳದೆ ಸತ್ಯ ನಿವೇದಿಸಿಕೊಂಡಾಗ ಆಗುವ ಪೀಕಲಾಟಗಳನ್ನು ಹಾಸ್ಯಮಯವಾಗಿ ಮಂಜು ಎಂ. ಮಸ್ಕಲ್‌ಮಟ್ಟಿ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು ಮನಸುಗಳ ಮಾತು ಮಧುರ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈ ಬಾರಿ ಕಾದಂಬರಿ ಮೂವಿ ಮೇಕರ‍್ಸ್ ಅಡಿಯಲ್ಲಿ ಅವರ ಮಡದಿ ಸೌಮ್ಯಶ್ರೀ ಹಾಗೂ ಸಂಬಂಧಿ ರಾಜೀವ್ ಎಚ್. ಅರಸ್ ನಿರ್ಮಾಣ ಮಾಡುತ್ತಿದ್ದಾರೆ.



’ಗೌರಿ ಪುತ್ರ’ ಚಿತ್ರದಲ್ಲಿ ಅಕ್ಷಯ್, ನಾಗಶೇಖರ್ ಹಾಗೂ ರಾಕೇಶ್ ಶರ್ಮ ಜೊತೆಗೆ ಐವರು ನಾಯಕಿಯರಿದ್ದಾರೆ - ನಿಖಿತಾ, ನಿವೇದಿತಾ, ರೂಪಿಕಾ, ಮಾನಸಿ ಹಾಗೂ ಸೌಮ್ಯಸಂಕಲ್ಪ. ಒಂದು ಪ್ರಯಾಣದಲ್ಲಿ ಚಿತ್ರದ ಅರ್ಧಭಾಗ ನಡೆಯುತ್ತದೆ. ೩ ಹಾಡು, ೩ ಸಾಹಸ ಹಾಗೂ ೨ ಬಿಟ್ ಸಾಂಗ್‌ಗಳಿರುವ ಈ ಚಿತ್ರ ಬೆಂಗಳೂರು, ಚಿತ್ರದುರ್ಗ ಹಾಗೂ ಹಿರಿಯೂರಿಗೆ ಪ್ರಯಾಣ ಬೆಳಸಿದೆ.



ಜಗನ್ ಅವರ ಕತೆಗೆ ನಿರ್ದೇಶಕರೆ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಸದ್ಯಕ್ಕೆ ಡಬ್ಬಿಂಗ್ ಹಂತದಲ್ಲಿರುವ ಈ ಚಿತ್ರ ೩೪ ದಿನಗಳಲ್ಲಿ ಚಿತ್ರೀಕರಣ ಮಾಡಿದೆ. ಮಿಲಿಂದ್ ಧರ್ಮಸೇನಾ ಈ ಚಿತ್ರದ ಸಂಗೀತ ನಿರ್ದೇಶಕರು ಹಾಗೂ ಪಿ. ಎಲ್. ರವಿ ಛಾಯಾಗ್ರಾಹಕರು. ಪೋಷಕ ಕಲಾವಿದರಲ್ಲಿ ರಮೇಶ್ ಭಟ್, ಸಿಹಿಕಹಿ ಗೀತಾ, ಮಾಲತಿ ಸರದೇಶ್‌ಪಾಂಡೆ, ಪವನ್ ಹಾಗೂ ಇನ್ನಿತರರು ಇದ್ದಾರೆ.




Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed